Friday, September 29, 2023
spot_img
- Advertisement -spot_img

ನೈಸರ್ಗಿಕ ವಿಕೋಪಕ್ಕೆ ನಲುಗಿದ ಹಿಮಾಚಲಕ್ಕೆ 15 ಕೋಟಿ ರೂ. ನೆರವಿನ ಹಸ್ತ ಚಾಚಿದ ಸಿದ್ದು ಸರ್ಕಾರ

ಬೆಂಗಳೂರು : ಕಳೆದ ನಾಲ್ಕು ದಿನಗಳಲ್ಲಿ 75ಕ್ಕೂ ಹೆಚ್ಚು ಜನರು ಮಳೆಯಿಂದಾಗಿ ಬಲಿಯಾಗಿ, ಅಪಾರ ಪ್ರಮಾಣದ ಭೂಕುಸಿತ ಹಾಗೂ ಮೇಘಸ್ಫೋಟದಿಂದ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ ನೈಸರ್ಗಿಕ ರಾಜ್ಯ ಸರ್ಕಾರ ನೆರವಿಗೆ ಮುಂದಾಗಿದೆ.

ಈ ಕುರಿತು ಟ್ವೀಟ್ ಮೂಲಕ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈಸರ್ಗಿಕ ವಿಕೋಪದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ 15 ಕೋಟಿ ರೂ. ಗಳ ಆರ್ಥಿಕ ನೆರವು ನೀಡಲು ಆದೇಶಿಸಿದ್ದಾರೆ.

ಇದನ್ನೂ ಓದಿ : ತಮಿಳುನಾಡಿಗೆ ಹೆಚ್ಚಿನ ನೀರು ಬಿಟ್ಟಿಲ್ಲ: ಡಿಕೆಶಿ

ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಅವರ ಕಾರ್ಯದರ್ಶಿ ಎನ್ ಜಯರಾಮ್ ಅವರು ಹಿಮಾಚಲ ಪ್ರದೇಶ ಸರ್ಕಾರದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.

ಕಳೆದ ನಾಲ್ಕು ಒಂದು ವಾರದಲ್ಲಿ 75 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಲ್ಲದೆ, ವ್ಯಾಪಕವಾದ ಮಳೆಯಿಂದಾಗಿ ನಲುಗಿ ಹೋಗಿರುವ ರಾಜ್ಯಕ್ಕೆ, ತನ್ನ ಸರ್ಕಾರದಲ್ಲಿ ಅನುದಾನದ ಕೊರತೆಯ ನಡುವೆಯೂ ಮಾನವೀಯ ನಡೆಯನ್ನು ತೋರಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles