Friday, September 29, 2023
spot_img
- Advertisement -spot_img

ಬಿಬಿಎಂಪಿ ಲಾರಿ ಹರಿದು ಬಾಲಕಿಯ ಕಾಲು ಮುರಿತ

ನೆಲಮಂಗಲ : ಬಿಬಿಎಂಪಿ ಲಾರಿ ಹರಿದು ಬಾಲಕಿಯ ಕಾಲು ಮುರಿತಕ್ಕೊಳಗಾದ ಘಟನೆ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನನಹಳ್ಳಿ ಗೇಟ್ ಬಳಿ ನಡೆದಿದೆ.

ವಿನುತ (17) ಕಾಲು ಮುರಿತಕ್ಕೆ ಒಳಗಾದ ಯುವತಿ. ಈಕೆ ತನ್ನ ತಂದೆಯೊಂದಿಗೆ ಶಿವಗಂಗೆಯಿಂದ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ : ನಮ್ಮದು ಆಪರೇಶನ್ ಅಲ್ಲ, ಕೋ ಆಪರೇಶನ್ : ಸಚಿವ ಎನ್.ಎಸ್.ಬೋಸರಾಜ್

ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತಕ್ಕೆ ಕಾರಣವಾದ ಬಿಬಿಎಂಪಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles