Thursday, September 28, 2023
spot_img
- Advertisement -spot_img

ಶಾಸಕ ಎಸ್‌.ಆರ್‌.ವಿಶ್ವನಾಥ್‌ಗೆ ಮತ್ತೆ ʼಟಿಟಿಡಿʼ ಸದಸ್ಯ ಸ್ಥಾನ; ಋಣ ತೀರಿಸಿಕೊಂಡ್ರಾ ಆಂಧ್ರ ಸಿಎಂ ಜಗನ್‌?

‌ಆಂಧ್ರಪ್ರದೇಶ: ವಿಶ್ವಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಆಡಳಿತ ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಸದಸ್ಯರಾಗಿ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ.

ಎಸ್.ಆರ್.ವಿಶ್ವನಾಥ್ ಅವರ ಆಯ್ಕೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರ ಪಾತ್ರ ಪ್ರಮುಖವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಜಗನ್‌ ಅವರಿಗೆ ಸೇರಿದ ಹಲವು ಆಸ್ತಿ ಯಲಹಂಕ ಭಾಗದಲ್ಲೇ ಇರುವುದರಿಂದ ವಿಶ್ವನಾಥ್‌ ಅವರಿಗೆ ಟಿಟಿಡಿಯಲ್ಲಿ ಪ್ರಮುಖ ಹುದ್ದೆ ನೀಡುವ ಮೂಲಕ ಋಣ ಸಂದಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಲಹಂಕ ಕ್ಷೇತ್ರದ ತಮ್ಮ ಆಸ್ತಿ ಸಂಬಂಧ ಸ್ಥಳೀಯ ಶಾಸಕರಾದ ವಿಶ್ವನಾಥ್ ಅವರಿಗೆ ಜಗನ್ ಮನ್ನಣೆ ನೀಡಿದ್ದಾರೆ. ಇವರಿಂದಾಗಿಯೇ ಎಸ್.ಆರ್.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಟಿಟಿಡಿ ನಿರ್ದೇಶಕ ಸ್ಥಾನ ಒಲಿದಿದೆ.

ಇದನ್ನೂ ಓದಿ: ಟಿಟಿಡಿ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದ ಆರ್ ವಿ ದೇಶಪಾಂಡೆ

ಟಿಟಿಡಿ ನಿರ್ದೇಶಕ ಸ್ಥಾನ ಒಂದು ಪ್ರತಿಷ್ಠಿತ ಹುದ್ದೆಯಾಗಿದ್ದು, ಎಸ್.ಆರ್.ವಿಶ್ವನಾಥ್ ಹಾಗೂ ಜಗನ್ ಮೋಹನ್‌ ರೆಡ್ಡಿ ನಡುವೆ ಒಳ ಒಪ್ಪಂದ ನಡೆದಿದೆ. ಇದರಿಂದಲೇ ವಿಶ್ವನಾಥ್‌ ಅವರಿಗೇ ಈ ಅದೃಷ್ಟ ಒಲಿದಿದೆ ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಜಿ ಸಚಿವ ಹಾಗೂ ಹಳಿಯಾಳದ ಶಾಸಕ ಆರ್‌.ವಿ.ದೇಶಪಾಂಡೆಯವರನ್ನು ನೇಮಕ ಮಾಡಲಾಗಿದೆ. ನೂತನವಾಗಿ ರಚನೆಯಾಗಿರುವ 24 ಸದಸ್ಯರಿರುವ ಆಡಳಿತ ಮಂಡಳಿ ಸದಸ್ಯರಲ್ಲಿ ಆರ್‌.ವಿ.ದೇಶಪಾಂಡೆ ಸೇರಿದಂತೆ ರಾಜ್ಯದಿಂದ ಇಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles