ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು ಶಿಕ್ಷಕರ ದಿನಾಚರಣೆಯ ಅಂಗವಾಗಿ ಉತ್ತಮ ಶಿಕ್ಷಕರಿಗೆ ನೀಡುವ ʼರಾಷ್ಟ್ರೀಯ ಶಿಕ್ಷಕ ಪ್ರಶಸ್ತಿʼಗೆ ರಾಜ್ಯದ ಆರು ಮಂದಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದವರು
* ನಾರಾಯಣ ಪರಮೇಶ್ವರ ಭಾಗವತ್-ಮಾರಿಕಾಂಬ ಸರ್ಕಾರಿ ಪ್ರೌಢಶಾಲೆ, ಶಿರಸಿ
*ಸಪ್ನಾ ಶ್ರೀಶೈಲ್ ಅನಿಗೋಲ್-ಎಸ್ಸಿಪಿ ಹೈಸ್ಕೂಲ್ ಬಾಗಲಕೋಟೆ
*ಎಸ್.ಆರ್.ಮಹದೇವ ಪ್ರಸನ್ನ-ಧಾರವಾಡ ಐಐಟಿ
*ಪೂಜಾ ಆರ್.ಸಿಂಗ್-ಎನ್ಎಸ್ಟಿಐ, ಬೆಂಗಳೂರು
*ದಿವ್ಯಾ ಎಲ್.-ಎನ್ಎಸ್ಐಟಿಡಬ್ಲ್ಯು, ಬೆಂಗಳೂರು
*ದಿನೇಶ್ ಬಾಬು ಜೆ.-ಐಐಟಿ ಬೆಂಗಳೂರು
ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ನಾಡಿನ ಹೆಮ್ಮೆಯ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳು. ತಮ್ಮೆಲ್ಲರ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ನಾಳೆ ಪ್ರಶಸ್ತಿ ಪ್ರದಾನ: ಇನ್ನು ಸೆಪ್ಟೆಂಬರ್ 5ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪುರಸ್ಕೃತರಿಗೆ ಅರ್ಹತೆಯ ಪ್ರಮಾಣಪತ್ರ, ₹ 50,000 ನಗದು ಪ್ರಶಸ್ತಿ ಮತ್ತು ಪ್ರತಿಷ್ಠಿತ ಬೆಳ್ಳಿ ಪದಕವನ್ನು ನೀಡಲಾಗುವುದು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.