Monday, December 11, 2023
spot_img
- Advertisement -spot_img

‘ಅವರು ಹೆದರಿದ್ದಾರೆ, ಗಂಟಲು ಒಣಗ್ತಿದೆ’; ಪ್ರಧಾನಿ ಕಾಲೆಳೆದ ಕಾಂಗ್ರೆಸ್

ಮುಂಬೈ : ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೆದರಿದ್ದಾರೆ ಎಂದು ಬಿಂಬಿಸುವ ಮೀಮ್ ಅನ್ನು ಹಂಚಿಕೊಂಡು ಕಾಂಗ್ರೆಸ್ ಕಾಲೆಳೆದಿದೆ.

ಪ್ರಧಾನಿ ಮೋದಿ ತೆರೆಯ ಹಿಂದೆ ಕುಳಿತು ಒಂದರ ಹಿಂದೆ ಒಂದು ಲೋಟ ನೀರು ಕುಡಿದಂತೆ ಬಿಂಬಿಸುವ ಮೀಮ್ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್, ‘ಅವರು ಹೆದರಿದ್ದಾರೆ, ಅವರ ಗಂಟಲು ಒಣಗ್ತಿದೆ’ ಎಂದು ಬರೆದುಕೊಂಡಿದೆ. ಈ ಮೂಲಕ ಇಂಡಿಯಾ ಒಕ್ಕೂಟದ ಸಭೆಯಿಂದ ಹೆದರಿ ಪ್ರಧಾನಿ ನೀರು ಕುಡಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದೆ.

ಇತ್ತೀಚಿಗೆ ಕೇಂದ್ರ ಸರ್ಕಾರ ಗೃಹ ಬಳಕೆಯ ಗ್ಯಾಸ್ ಬೆಲೆ 200 ರೂಪಾಯಿ ಇಳಿಕೆ ಮಾಡುವುದಾಗಿ ಘೋಷಿಸಿದಾಗಲೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇಂಡಿಯಾ ಒಕ್ಕೂಟದ ಎರಡೇ ಸಭೆಗೆ ಗ್ಯಾಸ್ ರೇಟ್ 200 ರೂ. ಇಳಿಕೆಯಾಗಿದೆ ಎಂದಿದ್ದರು.

ಇಂಡಿಯಾ ಒಕ್ಕೂಟದ ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ನಡೆಯಿತು. ಈ ಸಭೆಯಲ್ಲಿ ವಿಶೇಷವಾಗಿ ಇಂಡಿಯಾ ಮೈತ್ರಿಕೂಟವು 13 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಿದೆ. ಒಕ್ಕೂಟದ ಮೊದಲನೆ ಸಭೆ ಬಿಹಾರದ ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಬೆಂಗಳೂರಿನಲ್ಲಿ ನಡೆದಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles