ಬೆಂಗಳೂರು: ಸಿಎಂ ಬೊಮ್ಮಾಯಿಯವರಿಗೆ ನಟ ಸುದೀಪ್ ಬೆಂಬಲ ಘೋಷಿಸಿದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
“ಪ್ರಧಾನಿ ನರೇಂದ್ರ ಮೋದಿ ಮುಖ ತೋರಿಸಿದರೂ ವೋಟು ಗಿಟ್ಟುವುದಿಲ್ಲ. ಸಿಎಂ ಬೊಮ್ಮಾಯಿ ಮುಖ ತೋರಿಸಿದರೂ ಮತ ಬರುವುದಿಲ್ಲ. ಹಾಗಾಗಿ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಟರ ಮೊರೆ ಹೋಗಿದೆ!. ಬಿಎಸ್ ಯಡಿಯೂರಪ್ಪ ಮುಖವನ್ನು ಮರೆಮಾಚಲು ಬಿಜೆಪಿ ಮುಂದಾಗಿದೆ. ಬಿಜೆಪಿಗೆ ಈಗ ವರ್ಚಸ್ಸು ನಾಯಕರಿಲ್ಲದಿರುವುದು ದುರಂತ” ಎಂದು ಟ್ವೀಟ್ ಮಾಡಿದೆ.
ನಟ ಕಿಚ್ಚ ಸುದೀಪ್ ನನಗೆ ರಾಜಕೀಯದಲ್ಲಿ ಹಲವು ಜನ ಫ್ರೆಂಡ್ಸ್ ಇದ್ದಾರೆ, ಆದ್ರೆ ನನ್ನ ಬದುಕಿನಲ್ಲಿ ಕಷ್ಟವಿದ್ದಾಗ ಸಿಎಂ ಬೊಮ್ಮಾಯಿಯವರು ನೆರವಾಗಿದ್ದರು, ಹೀಗಾಗಿ ನಾನು ಬೊಮ್ಮಾಯಿಯವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.