Monday, December 4, 2023
spot_img
- Advertisement -spot_img

ತಮ್ಮದೇ ಸರ್ಕಾರದ ಮೇಲೆ ಮುಂದುವರಿದ ಮುನಿಸು; ಮತ್ತೆ ಪತ್ರ ಬರೆದ ಕಾಂಗ್ರೆಸ್ ಹಿರಿಯ ಶಾಸಕ

ಕೊಪ್ಪಳ: ಮಾಜಿ ಸಚಿವ, ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸ್ಪಪಕ್ಷದ ವಿರುದ್ಧದ ತಮ್ಮ ಮುನಿಸು ಮುಂದುವರಿಸಿದ್ದು, ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯುವಂತೆ ಮತ್ತೆ ಪತ್ರ ಬರೆದಿದ್ದಾರೆ.

‘ಕೂಡಲೇ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೈ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕೆ ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಮುನಿಸು ಹೊರಹಾಕ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಗೈರು : ದೇವರ ಮೊರೆ ಹೋದ ದೇವೇಗೌಡರು

ಕೆಲ ದಿನಗಳ ಹಿಂದೆ ಶಾಸಕಾಂಗ ಸಭೆಗೆ ಒತ್ತಾಯಿಸಿ ಸಹಿ ಸಂಗ್ರಹ ಮಾಡಿದ್ದ ರಾಯರೆಡ್ಡಿ, ಸಚಿವರು ತಮ್ಮ ಮಾತು ಕೇಳ್ತಿಲ್ಲ ಎಂದು ಆರೋಪ ಮಾಡಿದ್ದರು. ರಾಯರೆಡ್ಡಿ ಬರೆದಿದ್ದ ಪತ್ರ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಸಭೆ ಕರೆಯುವಂತೆ ಸಿಎಂಗೆ ರಾಯರೆಡ್ಡಿ ಪತ್ರ ಬರೆದಿದ್ದಾರೆ.

ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಒತ್ತಾಯಿಸಿರುವ ಅವರು, ಜೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸಫಾರ್ಮರ್ ಅವಳಡಿಕೆಯಾಗ್ತಿಲ್ಲ. ತಮ್ಮ ಕ್ಷೇತ್ರವೊಂದಕ್ಕೆ 200 ಟ್ರಾನ್ಸಫಾರ್ಮರ್ ಅಗತ್ಯವಿದೆ. ಆದರೆ, ಅಧಿಕಾರಿಗಳು ತಮ್ಮ ಮಾತು ಕೇಳ್ತಿಲ್ಲ; ಅಲ್ಲದೇ ಅವರಿಂದ ಕೆಲಸ ಸಾದ್ಯವಾಗುತ್ತಿಲ್ಲ. ಇದರಿಂದ ರೈತರ ಜಮೀನಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆದು ಚರ್ಚಿಸಬೇಕು’ ಎಂದು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Related Articles

- Advertisement -spot_img

Latest Articles