Saturday, June 10, 2023
spot_img
- Advertisement -spot_img

ಇದೆಲ್ಲ ಬೇಡ, ಯಾವ ರೀತಿ ಉತ್ತರಿಸಬೇಕು ಎಂದು ಗೊತ್ತಿದೆ : ಎಂಬಿಪಾಟೀಲ್ ಹೇಳಿಕೆಗೆ ಡಿಕೆಸುರೇಶ್ ಕಿಡಿ

ಬೆಂಗಳೂರು: ಇದೆಲ್ಲ ಬೇಡ, ಯಾವ ರೀತಿ ಉತ್ತರಿಸಬೇಕು ಎಂದು ಗೊತ್ತಿದೆ ಎಂದು ಡಿಕೆಸುರೇಶ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಈರೀತಿಯಾಗಿ ಮಾತಾಡೋ ಅಗತ್ಯ ಇಲ್ಲ ಎಂಬಿಪಾಟೀಲ್ರೇ ಎಂದು ಗರಂ ಆದರು.

ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದರು, ಇನ್ನೂ ಪಾಟೀಲ್ ತಮಗೆ ಸಂಬಂಧಿಸದ ವಿಷಯವನ್ನು ಮಾತಾಡತೊಡಗಿದ್ದಾರೆ. ಅಧಿಕಾರ ಹಂಚಿಕೆಯ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದನ್ನೇ ಪುನರಾವರ್ತಿಸುತ್ತಿದ್ದೇನೆ ಎಂದಿದ್ದಾರೆ.

ಯಾರು ಏನಾದರೂ ಹೇಳಿಕೊಳ್ಳಲಿ, ಎಲ್ಲವನ್ನು ನೋಡಿಕೊಳ್ಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿದ್ದಾರೆ, ಮುಖ್ಯಮಂತ್ರಿಗಳಿದ್ದಾರೆ ಮತ್ತು ಎಐಸಿಸಿ ಅಧ್ಯಕ್ಷರಿದ್ದಾರೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ, ಡಿಕೆ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ. ಬಹುಮತ ಬರಲು ಡಿ.ಕೆ.ಶಿವಕುಮಾರ್ ಪಾತ್ರ ಕೂಡ ದೊಡ್ಡದಿದೆ. ಹೀಗಾಗಿ ಡಿಕೆ ಶಿವಕುಮಾರ್​ಗೆ ಸಿಎಂ ಅವಕಾಶ ಕೊಡಿ ಎಂದು ಈ ಹಿಂದೆ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಪ್ರತಿಕ್ರಿಯಿಸಿದ್ದಾರೆ.

Related Articles

- Advertisement -spot_img

Latest Articles