Sunday, September 24, 2023
spot_img
- Advertisement -spot_img

ದತ್ತಪೀಠವನ್ನು ಬೇಲಿ ರಹಿತ ಮಾಡೋದೇ ನಮ್ಮ ಸಂಕಲ್ಪ : ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು : ದತ್ತಪೀಠದ ಎಲ್ಲಾ ಬೇಲಿಗಳಿಂದ ನಾವು ಹೊರ ಬರಬೇಕು, ಅದು ನಮ್ಮ ಆಸೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಭಜರಂಗದಳ, ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಹೋಮ ಹುಣ್ಣಿಮೆ ಪೂಜೆ ಪ್ರಯುಕ್ತ ನಡೆದ ಹೋಮದಲ್ಲಿ ಶೋಭಾ ಭಾಗಿಯಾಗಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಎಲ್ಲಾ ಬೇಲಿಗಳು ನಿವಾರಣೆಯಾಗಬೇಕು, ಅದು ನಮ್ಮ ಅಪೇಕ್ಷೆ, ದತ್ತಪೀಠವನ್ನ ಬೇಲಿ ರಹಿತ ಮಾಡುವುದೇ ನಮ್ಮ ಸಂಕಲ್ಪ, ಹೀಗಾಗಿ ನಮ್ಮ ಸಂಕಲ್ಪ ಈಡೇರಲಿ ಅಂತ ದತ್ತನನ್ನ ಪ್ರಾರ್ಥೀಸಿದ್ದೇವೆ ಎಂದರು.

ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಕೇಸ್; ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ದತ್ತ ಪಾದುಕೆ ಆರಾಧನೆಯಿಂದ ಎಲ್ಲರಿಗೂ ಖುಷಿಯಾಗಿದೆ, ದತ್ತಪೀಠದಲ್ಲಿ ಈ ಪೂಜೆ ನಿರಂತರವಾಗಿ ನಡೆಯಬೇಕು, ದತ್ತಾತ್ರೇಯರಿಗೆ ತ್ರಿಕಾಲ ಪೂಜೆ ಆಗಬೇಕು, ಅದು ನಮ್ಮ ಅಪೇಕ್ಷೆ, ದತ್ತಪೀಠದ ದಶಕಗಳ ಹೋರಾಟಕ್ಕೆ ನಮ್ಮ ಸರ್ಕಾರದಲ್ಲಿ ಜಯ ಸಿಕ್ಕಿದೆ ಎಂದು ಸಂತಸಪಟ್ಟರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles