Friday, September 29, 2023
spot_img
- Advertisement -spot_img

ʼಎಸ್ಸಿ-ಎಸ್ಟಿ ಅನುದಾನ ಸರಿಯಾಗಿ ಬಳಸದಿದ್ರೆ ಮಂತ್ರಿ, ಶಾಸಕರ ಮನೆಗೆ ಮುತ್ತಿಗೆ ಹಾಕ್ತೀವಿʼ

ಬೆಂಗಳೂರು: 2023-24 ಸಾಲಿನ ಎಸ್ಸಿ-ಎಸ್ಟಿ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ಕೊಟ್ಯಂತರ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಜನಾಂದೋಲನ ನಡೆಯಲಿದೆ, ಎಸ್ಸಿ-ಎಸ್ಟಿ ಹಣ ಅಭಿವೃದ್ಧಿಗೆ, ಕಲ್ಯಾಣಕ್ಕೆ, ಶಿಕ್ಷಣಕ್ಕೆ ಬಳಸದೇ ಇದ್ದರೆ ಮೂರು ಹಂತದಲ್ಲಿ ಜಿಲ್ಲಾ ಮಂತ್ರಿಗಳಿಗೆ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕ್ತೇವೆ ಎಂದರು.

ಇದನ್ನೂ ಓದಿ: ನೆದರ್‌ ಲ್ಯಾಂಡ್‌ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್

ಇನ್ನೂ ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ದಲಿತ ಗೃಹ ಸಚಿವರ ಬಾಯಿ ಮುಚ್ಚಿಸಿದ್ದಾರೆ, ಪರಮೇಶ್ವರ್ ಗೆ ತಾಕತ್ತು ಇದ್ರೆ ಕ್ರಮ ಕೈಗೊಳ್ಳಲಿ, ದಲಿತರಿಗೆ ರಕ್ಷಣೆ ಕೊಡಲು ಆಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಪರಮೇಶ್ವರ್‌ ವಿರುದ್ಧ ಹರಿಹಾಯ್ದರು.

ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನದಲ್ಲೇ ರೈತ ವಿರೋಧಿ ನಿರ್ಣಯ ತೆಗೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.ಸರ್ಕಾರಕ್ಕೆ ಎಚ್ಚರಿಕೆ ಕೊಡುವುದಕ್ಕೆ ರೈತ ಮೋರ್ಚಾ ಪ್ರತಿಭಟನೆ ಮಾಡಿದ್ವಿ, ಪರಪ್ಪನ ಅಗ್ರಹಾರದಲ್ಲಿ ರೈತರು ಬಂಧನಕ್ಕೆ ಒಳಗಾಗಿದ್ದಾರೆ , ಬಂಧನಕ್ಕೆ ಒಳಗಾದ ರೈತರನ್ನ ಭೇಟಿ ಮಾಡಿದ್ವಿ, ಈ ಸರ್ಕಾರದಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles