Wednesday, November 29, 2023
spot_img
- Advertisement -spot_img

ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಿಂದ ನನಗೆ ಅನುಕೂಲವಾಗಲಿದೆ: ಹೆಚ್.ನಿಂಗಪ್ಪ

ತುಮಕೂರು: ಈ ಬಾರಿ ಲೋಕಸಭೆಗೆ ನಾನೇ ಟಿಕೆಟ್ ಆಕಾಂಕ್ಷಿ. ಇದಕ್ಕಾಗಿ ನಾನೇ ಟಿಕೇಟ್ ಕೇಳುತ್ತೇನೆ. ನಮ್ಮ ಪಕ್ಷಕ್ಕೆ ಗೌರಿಶಂಕರ್ ಆಗಮನ ಅನುಕೂಲವಾಗಲಿದೆ. ಅವರು ನನ್ನ ಪರವಾಗಿ ಕೆಲಸ ಮಾಡ್ತಾರೆ ಎಂದು ಮಾಜಿ ಶಾಸಕ ಹೆಚ್.ನಿಂಗಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ನ ಮಾಜಿ ಶಾಸಕ ಗೌರಿಶಂಕರ್ ಕೈ ಪಡೆಗೆ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈ ಕುರಿತು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್. ನಿಂಗಪ್ಪ, ವಿಧಾನಸಭೆ ಚುನಾವಣೆಗೆ ನಿಂತುಕೊಳ್ಳುವಂತೆ ವರಿಷ್ಠರು ಹೇಳಿದ್ದರು. ಅನಾರೋಗ್ಯದಿಂದ ಚುನಾವಣೆ ಸ್ಪರ್ಧೆ ಮಾಡುವುದನ್ನ ನಿರಾಕರಿಸಿದ್ದೆ. ಆದರೆ ಈಗ ಜೆಡಿಎಸ್ ನ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಗೌರಿಶಂಕರ್ ಆಗಮನ ನನಗೆ ಅನುಕೂಲವಾಗಲಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಕಳ್ಳತನದ ಕಾಂಗ್ರೆಸ್ ಆರೋಪಕ್ಕೆ ಕುಮಾರಸ್ವಾಮಿ ಸ್ಪಷ್ಟನೆ

ಈ ಬಾರಿ ಲೋಕಸಭೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದ ಅವರು, ನಾನು ಹೈಕಮಾಂಡ್ ವಿರೋಧಿಯಲ್ಲ. ಪಕ್ಷಕ್ಕೆ ಶತಮಾನಗಳ ಇತಿಹಾಸ ಇದೆ. ವಿಧಾನಸಭೆಗೆ ಚುನಾವಣೆಗೆ ನಿಂತುಕೊಳ್ಳುವಂತೆ ಪಕ್ಷದ ಹಿರಿಯರು ನನಗೆ ಹೇಳಿದ್ದರು. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಏನೂ ತಪ್ಪಿಲ್ಲ ನನ್ನದೇ ತಪ್ಪು. ತುಮಕೂರು ಲೋಕಸಭೆಗೆ ಈ ಬಾರಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಪರೀಕ್ಷೆ ಆಕ್ರಮ ತಡೆಗೆ ʼಕೆಇಎʼ ಹೊಸ ಪ್ಲಾನ್..!

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles