Wednesday, March 22, 2023
spot_img
- Advertisement -spot_img

ಭವಾನಿ ರೇವಣ್ಣರಿಗೆ ಟಿಕೆಟ್‌ ಕೊಡಲೇಬೇಕು : ಬೆಂಬಲಿಗರಿಂದ ಬೃಹತ್‌ ಪ್ರತಿಭಟನೆ

ಹಾಸನ: ಈ ಬಾರಿ ಹಾಸನ ಕ್ಷೇತ್ರವನ್ನು ಬಿಜೆಪಿಯಿಂದ ಕಸಿಯಲು ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಿದ್ದು, ಹೀಗಾಗಿ ಭವಾನಿ ರೇವಣ್ಣರಿಗೆ ಟಿಕೆಟ್‌ ಕೊಡಲೇಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಬೆಂಬಲಿಗರು ಬೃಹತ್‌ ಪ್ರತಿಭಟನೆ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರದಲ್ಲಿ ಏಳು ಸ್ಥಾನ ಬರಬೇಕಾಗಿತ್ತು. ಆರು ಸ್ಥಾನ ಗಳಿಸಲು ಮಾತ್ರ ಸಾಧ್ಯವಾಯಿತು. ನಮ್ಮ ಸ್ವಯಂ ಅಪರಾಧದಿಂದ ಹಾಸನ ಕ್ಷೇತ್ರವನ್ನು ಒಬ್ಬ ಭ್ರಷ್ಟಶಾಸಕನಿಗೆ ಅರ್ಪಿಸಿದ್ದೇವೆ. ಈಗ ಬೇಸರವಾಗಿದೆ. ಮುಂದೆ ನಡೆಯುವ ಚುನಾವಣೆಯಲ್ಲಿ ಭ್ರಷ್ಟಶಾಸಕನನ್ನು ಕಳುಹಿಸಬೇಕಾದರೇ ಈ ಬಾರಿ ಭವಾನಿ ರೇವಣ್ಣ ಅಥವಾ ರೇವಣ್ಣ ಕುಟುಂಬದವರಿಗೆ ಟಿಕೆಟ್‌ ಕೊಟ್ಟರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯಟ್ಟರು.

ಭವಾನಿಯವರು ಹಿರಿಯರು. ಹಾಗಾಗಿ ಭವಾನಿ ರೇವಣ್ಣನವರಿಗೆ ಟಿಕೆಟ್‌ ಕೊಡಲೇಬೇಕೆಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಪ್ರಮುಖ ರಸ್ತೆಯಲ್ಲಿ ಭವಾನಿ ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಿ ಟಿಕೆಟ್‌ ನೀಡುವಂತೆ ಆಗ್ರಹಿಸಿದೆ.

Related Articles

- Advertisement -

Latest Articles