Thursday, June 8, 2023
spot_img
- Advertisement -spot_img

ಪಾಪ ಮೋದಿ ರೆಸ್ಟ್‌ ಪಡೆ​ಯಲು ರಾಜ್ಯಕ್ಕೆ ಬರ್ತಿದ್ದಾರೆ: ಹೆಚ್‌ಡಿಕೆ ವ್ಯಂಗ್ಯ

ರಾಮ​ನ​ಗ​ರ: ದೇಶದ ಅಭಿ​ವೃದ್ಧಿ ಮಾಡಿ ಸುಸ್ತಾ​ಗಿ​ದ್ದಾರೆ, ಪಾಪ ಮೋದಿ ರೆಸ್ಟ್‌ ಪಡೆ​ಯಲು ರಾಜ್ಯಕ್ಕೆ ಬರು​ತ್ತಿ​ದ್ದಾರೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾ​ರ​ಸ್ವಾಮಿ ವ್ಯಂಗ್ಯ​ವಾ​ಡಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ಪ್ರಧಾನಿ ಮೋದಿ ಹುಲಿ ವಿಹಾ​ರಕ್ಕಾಗಿ ಬಂಡೀ​ಪು​ರಕ್ಕೆ ಬರು​ತ್ತಿ​ದ್ದಾರೆ. ರಾಜ್ಯದ ಜನರ ಕಷ್ಟಸುಖ ವಿಚಾ​ರಿ​ಸಲು ಅಲ್ಲ. ಕೆಲಸ ಮಾಡಿ ಸುಸ್ತಾ​ಗಿ​ದ್ದಾರೆ. ಹಾಗಾಗಿ ರೆಸ್ಟ್‌ ಪಡೆ​ಯಲು ಬರು​ತ್ತಿ​ದ್ದಾ​ರೆ​ ಎಂದು ಲೇವಡಿ ಮಾಡಿ​ದ​ರು.

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ನನ್ನದಾಗಿದೆ. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಬೇರೆ ಪಕ್ಷಗಳ ಆಮಿಷಗಳಿಗೆ ಬಲಿಯಾಗಬೇಡಿ. ಅವರು ಕೊಡುತ್ತಿರುವ ಕುಕ್ಕರ್‌ ಬ್ಲಾಸ್ಟ್‌ ಆಗುತ್ತಿದೆ. ನಕಲಿ ಕುಕ್ಕರ್‌ ಹಾವಳಿಯಿಂದ ದೂರ ಇರಬೇಕು’ ಎಂದು ಕರೆ ನೀಡಿದರು.

ಜೆಡಿ​ಎಸ್‌ ಎರ​ಡನೇ ಪಟ್ಟಿ​ ಬಿಡು​ಗಡೆ ಮಾಡು​ತ್ತೇನೆ. ಈಗ ಸಾಕಷ್ಟುಒತ್ತ​ಡ​ಗ​ಳಿದ್ದು, ಒಂದಷ್ಟು ಬದ​ಲಾ​ವ​ಣೆ​ಗಳು ಆಗ​ಬೇ​ಕಿದೆ ಎಂದರು ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದರು.

Related Articles

- Advertisement -spot_img

Latest Articles