Sunday, October 1, 2023
spot_img
- Advertisement -spot_img

ಕಾವೇರಿ ನೀರು ಹಂಚಿಕೆ ವಿವಾದ : ಆಮ್ ಆದ್ಮಿ ಪಕ್ಷದಿಂದ ಇಂದು ವಿಶೇಷ ಸಭೆ

ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಆಮ್ ಆದ್ಮಿ ಪಕ್ಷ (ಎಎಪಿ) ದಿಂದ ವಿಶೇಷ ಸಭೆ ಕರೆಯಲಾಗಿದೆ.

ಸರ್ಕಾರ ಸರ್ವ ಪಕ್ಷ ಸಭೆಯಲ್ಲಿ ಕೇವಲ ಮೂರು ಪಕ್ಷಗಳನ್ನು ಮಾತ್ರ ಆಹ್ವಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಆಮ್ ಆದ್ಮಿ ನಾಯಕರು, ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತ್ರತ್ವದಲ್ಲಿ ವಿಶೇಷ ಸಭೆ ಕರೆದಿದ್ದಾರೆ. ‘ನಮ್ಮ ಜಲ ನಮ್ಮದು’ ಎಂಬ ಶೀರ್ಷಿಕೆಯಡಿ ಸಭೆ ನಡೆಯಲಿದೆ.

ನಗರದ ಶಾಸಕರ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ನೀರಾವರಿ ತಜ್ಞರು, ರೈತ ಮುಖಂಡರು, ಕಾನೂನು ತಜ್ಞರು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಭಾಗಿಯಾಗುವ ಪ್ರಮುಖರು : ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್, ಕಾವೇರಿ ಇತಿಹಾಸ ವಾದ ವಿವಾದಗಳ ಲೇಖಕ ಚಂದ್ರಶೇಖರ್, ನೀರಾವರಿ ತಜ್ಞ ಶಂಕರಪ್ಪ ತೋರಣಗಲ್, ಜಲ ಸಂರಕ್ಷಣಾಕಾರ ಕ್ಯಾ. ರಾಜಾರಾಮ, ಕಾನೂನು ಸಲಹೆಗಾರರಾದ ಬ್ರಿಜೇಶ್ ಕಾಳಪ್ಪ, ಕೆ. ದಿವಾಕರ್, ಕನ್ನಡ ಹೋರಾಟಗಾರ ಅರುಣ್ ಜಾವಗಲ್, ರೈತ ಹೋರಾಟಗಾರ್ತಿ ಆನಂದ ಜಯರಾಂ, ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ, ಜೆಡಿಯು ಮುಖಂಡ ಮಹಿಮಾ ಪಟೇಲ್, ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ, ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಲಾವಿದರಾದ ಕಪ್ಪಣ್ಣ, ರೈತ ಹೋರಾಟಗಾರ ಪ್ರೊ. ಹುಲಕೆರೆ ಮಹಾದೇವ ಸೇರಿದಂತೆ ಇತರರು ಆಪ್ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles