ಚಿಕ್ಕಬಳ್ಳಾಪುರ: ವಿಕೃತಿ ಮೆರೆಯುವವರನ್ನ ಎಡಪಂಥೀಯರು ಅಂತ ಕರೆಯಲಾಗುತ್ತದೆ ಅಥವಾ ಎಡಪಂಥೀಯರಿಂದ ಪ್ರೇರಣೆ ಪಡೆದವರು ಅಂತಲೂ ಕರೆಯಬಹುದು ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಆರ್ಎಸ್ಎಸ್ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಎಡಪಂಥೀಯರಿಂದ ದೇಶದಲ್ಲಿ ವಿಕೃತಿ ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯುತ್ತಾ ಬಂದಿವೆ ಎಂದರು. ನಮ್ಮ ರಾಜ್ಯದ ವಿಪಕ್ಷ ನಾಯಕ ಸಿದ್ದರಾಮಯ್ಯ ಅಂತಹದ್ದೇ ರೀತಿಯಲ್ಲಿ ಮಾತನಾಡುತ್ತಾ ವಿಕೃತಿ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಕಮಲ್ ಹಾಸನ್ ಬಗ್ಗೆ ಕಿಡಿಕಾರಿದ ಕಲ್ಲಡ್ಕ, ಕಮಲ್ ಹಾಸನ್ ತುಂಬಾ ಜನರಿಗೆ ಒಳ್ಳೆಯ ನಟ. ಆದ್ರೆ ಅವನೇನು ಆಕ್ಟ್ ಮಾಡಿದ್ದಾನೆ ಅನ್ನೋದು ಗೊತ್ತಿಲ್ಲ. ಚೋಳರ ಕಾಲದಲ್ಲಿ ಚೋಳರು ಹಿಂದೂಗಳೇ ಆಗಿರಲಿಲ್ಲ ಅಂತ ಹೇಳಿದ. ತಲೆಗೆ ಹುಳ ಬಿಟ್ಟು ಸುಮ್ಮನೆ ಕೂತ. ಇಂತಹದ್ದನ್ನೇ ಮಾಡ್ತಾ ಎಡಪಂಥೀಯರು ನಮ್ಮನ್ನ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರದ ಬಗ್ಗೆ ಹೆಮ್ಮೆ ಪಡುವಂತಹ ವಿಷಯಗಳು ಪಠ್ಯ ಪುಸ್ತಕದಲ್ಲಿ ಬರಬಾರದು ಅಂತ ವಿರೋಧ ಮಾಡುತ್ತಲೇ ಬಂದ್ರು. ಹೊಸ ಪಠ್ಯ ತಿದ್ದುಪಡಿ ವೇಳೆ ಕೆಲ ವಿಷಯಗಳ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.