Wednesday, November 29, 2023
spot_img
- Advertisement -spot_img

ʼಮಂಡ್ಯ ರೈತರನ್ನು ಕಾವೇರಿ ವಿಚಾರದಲ್ಲಿ ಮುಳುಗಿಸಿದ್ರಲ್ಲʼ

ಮಂಡ್ಯ : ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದ ಹಿನ್ನೆಲೆ ಮಂಡ್ಯದಲ್ಲಿ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದಿಂದ ಕಾವೇರಿ ನದಿಗಿಳಿದು ಅನ್ನದಾತರು ಪ್ರತಿಭಟನೆ ನಡೆಸಿದ್ದಾರೆ. ಶ್ರೀರಂಗಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದಲ್ಲಿ ಭೂಮಿತಾಯಿ ಹೋರಾಟ ಸಮಿತಿಯವರು ಪ್ರತಿಭಟಿಸಿದ್ದಾರೆ.

ಮಂಡ್ಯ ರೈತರನ್ನ ಕಾವೇರಿ ವಿಚಾರದಲ್ಲಿ ಮುಳುಗಿಸಿದ್ರಲ್ಲ, ಬಾಯಿ ಬಡಿದುಕೊಂಡು ನದಿಯಲ್ಲಿ ಮುಳುಗಿ ಮೇಲೆದ್ದು ಘೋಷಣೆ ಕೂಗಿದ್ದಾರೆ.

ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ಕಾವೇರಿ ನ್ಯಾಯಾಧೀಕರಣ ಪೋಸ್ಟರ್ ಗೆ ಬೆಂಕಿ ಹಚ್ಚಿದಲ್ಲದೇ ಸರ್ಕಾರದ ನಡೆಗೆ ಖಂಡಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles