Friday, September 29, 2023
spot_img
- Advertisement -spot_img

ಇಸ್ರೋ ಸಾಧನೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ : ಮೋದಿ

ಬೆಂಗಳೂರು : ಭಾರತದ ಇಸ್ರೋ ಸಾಧನೆಯನ್ನು ಇಂದು ಇಡೀ ಜಗತ್ತೇ ಕೊಂಡಾಡುತ್ತಿದೆ ನನ್ನ ದೇಶದ ಹೆಮ್ಮೆಯ ವಿಜ್ಞಾನಿಗಳಿಗೆ ನಾನು ಸೆಲ್ಯೂಟ್ ತಿಳಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾನು ವಿದೇಶದಲ್ಲಿದ್ದಾಗಲೂ ನನ್ನ ಮನಸ್ಸು ನಿಮ್ಮ ಕಡೆಗೆಯೇ ಇತ್ತು. ಚಂದ್ರಯಾನ ಯಶಸ್ಸಿಗೆ ನಾನು ಅತ್ಯಂತ ಸಂತಸನಾಗಿದ್ದೇನೆ. ಇದರ ಯಶಸ್ಸು ಅತ್ಯಂತ ದೊಡ್ಡ ಸಾಧನೆಯಾಗಿದೆ. ಇಸ್ರೋ ಸಾಧನೆಗೆ ಮೋದಿ ಭಾವುಕರಾಗಿ ವಿಜ್ಞಾನಿಗಳ ಶ್ರಮವನ್ನು ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತವು ಈಗ ಚಂದ್ರನ ಮೇಲಿದೆ. ನಾನು ಎಲ್ಲಿ ತಲುಪುತ್ತೇವೆ ಅಲ್ಲಿ ಯಾರೂ ತಲುಪಲು ಸಾಧ್ಯವಿಲ್ಲ ಎಂಬ ಹೆಮ್ಮೆ ವ್ಯಕ್ತಪಡಿಸಿದರು.

ಕತ್ತಲು ಪ್ರದೇಶದಲ್ಲೂ ಹೋಗಿ ಜಗತ್ತಿನಲ್ಲಿ ಬೆಳಕನ್ನು ಮೂಡಿಸುತ್ತಿದೆ. ಭಾರತದ ವೈಜ್ಞಾನಿಕ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಪ್ರತಿಯೊಬ್ಬ ವಿಜ್ಞಾನಿಗಳಿಗೂ ನನ್ನ ಸೆಲ್ಯೂಟ್ ಎಂದು ಕೃತಜ್ಞತೆಗಳನ್ನು ತಿಳಿಸಿದರು.

ಯಾವ ದೇಶವು ಮಾಡಿರದ ಸಾಧನೆಯನ್ನು ನಾವು ಮಾಡಿದ್ದೇವೆ, ನಮ್ಮ ದೇಶದ ಘನತೆಯನ್ನು ವಿಜ್ಞಾನಿಗಳು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.

ನಮ್ಮ ವಿಜ್ಞಾನಿಗಳು ಭಾರತದ ಕನಸನ್ನು ನನಸು ಮಾಡಿದ್ದಾರೆ. ಚಂದಿರನ ಅಂಗಳದಲ್ಲಿ ಪ್ರಜ್ಞಾನ್ ತನ್ನ ಪರಾಕ್ರಮವನ್ನು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾರಿ ಶಕ್ತಿಯು ಅತ್ಯಂತ ದೊಡ್ಡ ಶಕ್ತಿಯಾಗಿದೆ. ಈ ಅಭೂತಪೂರ್ವ ಯಶಸ್ಸಿನಲ್ಲಿ ಭಾಗಿಯಾದ ಮಹಿಳಾ ವಿಜ್ಞಾನಿಗಳನ್ನು ಅಭಿನಂದಿಸುವೆ ಎಂದು ಅವರನ್ನು ಹಾಡಿ ಹೊಗಳಿದರು.

ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಕೇಂದ್ರವೆಂದು ನಾಮಕರಣ ಮಾಡಿದ ಅವರು, ಶಿವಶಕ್ತಿ ಎಂಬುವುದು ಅಭಿವೃದ್ದಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಭಾರತದ ಮನ ಮನಗಳಲ್ಲೂ ತ್ರಿವರ್ಣ ಧ್ವಜವು ರಾರಾಜಿಸುತ್ತಿದೆ. ಚಂದ್ರಯಾನ2ರ ಪತನದ ಸ್ಥಳವನ್ನು ತಿರಂಗಾ ಕೇಂದ್ರವೆಂದು ಮೋದಿ ನಾಮಕರಣ ಮಾಡಿದರು. ಈ ಸ್ಥಳದಿಂದಲೇ ಇಷ್ಟೊಂದು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಚಂದ್ರಯಾನ-2ರ ವಿಫಲತೆಯನ್ನು ನೆನಪಿಸಿಕೊಂಡರು.

ಈಗ ಅದೇ ತಿರಂಗಾ ಚಂದ್ರನ ಮೇಲೆ ಹಾರಾಡುತ್ತಿದೆ. ಇದಕ್ಕೆ ಕಾರಣರಾದ ಇಸ್ರೋ ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ಅರ್ಥವಾಗಬೇಕಿದೆ ಎಂದ ಅವರು ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆಯನ್ನು ತಲುಪಿರುವ ದಿನವಾದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗುವುದು ಎಂದು ಘೋಷಿಸಿದರು.

Related Articles

- Advertisement -spot_img

Latest Articles