Sunday, September 24, 2023
spot_img
- Advertisement -spot_img

ಚಂದ್ರನ ಬಳಿಕ ‘ಸೂರ್ಯನತ್ತ’ ಇಸ್ರೋ ಚಿತ್ತ : ಶೀಘ್ರದಲ್ಲೇ ಮಿಷನ್ ಆದಿತ್ಯ ಎಲ್-1 ನಭಕ್ಕೆ

ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಈ ಬೆನ್ನಲ್ಲೇ ಸೂರ್ಯನತ್ತ ಇಸ್ರೋ ಚಿತ್ತ ನೆಟ್ಟಿದೆ.

ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೌರ (ಸೂರ್ಯ) ಅಧ್ಯಯನದ ಮಿಷನ್ ಆದಿತ್ಯ ಎಲ್ -1 ಕುರಿತು ಮಾಹಿತಿ ನೀಡಿದರು. ಇಸ್ರೋ ಮುಖ್ಯಸ್ಥ ಸೋಮನಾಥನ್ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದರು.

ಇದನ್ನೂ ಓದಿ : ಭಾರತ ಈಗ ‘ಚಂದ್ರನ ಮೇಲಿದೆ’ ; ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಭಾರತ ಏನನ್ನು ಬೇಕಾದರೂ ಸಾಧಿಸಲಿದೆ ಎಂಬುದು ಸಾಬೀತಾಗಿದೆ. ಚಂದ್ರಯಾನ-3ರ ಯಶಸ್ಸಿನ ಬಳಿಕ ಇಸ್ರೋ ಸೂರ್ಯನತ್ತ ಗುರಿಯಿಟ್ಟಿದೆ. ಸೂರ್ಯನ ಅಧ್ಯಯನಕ್ಕಾಗಿ ಅತೀ ಶೀಘ್ರದಲ್ಲಿ ಮಿಷನ್ ಆದಿತ್ಯ ಎಲ್-1 ಉಡಾವಣೆ ಮಾಡಲಾಗುವುದು. ಆ ಬಳಿಕ ನಮ್ಮ ಗುರಿ ವೀನಸ್ (ಶುಕ್ರ) ಆಗಿದೆ ಎಂದು ಪ್ರಧಾನಿ ಹೇಳಿದರು.

ಇಸ್ರೋದ ಆದಿತ್ಯ ಎಲ್-1 ಮಿಷನ್ ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇಲ್ಲಿಯವರೆಗಿನ ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆ ಎಂದು ಪರಿಗಣಿಸಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles