ಬೆಂಗಳೂರು : “ನಾಡಿನ ಜನರ ಸಂಕಷ್ಟ ನಿವಾರಣೆ ಮತ್ತು ನಾಡು, ನುಡಿ ಹಾಗೂ ಮೂಲ ಸಮಸ್ಯೆಗಳನ್ನು ಬಗೆಹರಿಸುವುದು ರಾಷ್ಟ್ರೀಯ ಜನಹಿತ ಪಾರ್ಟಿಯ ಉದ್ದೇಶ ಎಂದು ಅಧ್ಯಕ್ಷ ಮಂಜುನಾಥ್ ಹೇಳಿದರು.
ರಾಷ್ಟ್ರೀಯ ಜನಹಿತ ಪಾರ್ಟಿಯ ಮುಖಂಡರು ಕುಕ್ಕರ್ ಚಿಹ್ನೆ, ಪ್ರಣಾಳಿಕೆ ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲೂ ಸಮಾಜಮುಖಿ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದಿಸಲಿದ್ದಾರೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದು ನಾಡಿನ ನೆಲ, ಜಲ, ಭಾಷೆ ರಕ್ಷಣೆಗಾಗಿ ಅವಿರತವಾಗಿ ಪಕ್ಷ ಹೋರಾಡಲಿದೆ ಎಂದು ತಿಳಿಸಿದರು.
ವೈದ್ಯ ಸೌಲಭ್ಯ, ಶಿಕ್ಷಣ, ಆರೋಗ್ಯ, ರೈತರ ಬದುಕು ಸಾಗಿಸಲು ಹಾಗೂ ನಿರುದ್ಯೋಗ ನಿವಾರಣೆಗೆ 15 ಲಕ್ಷ ರೂ ಗ್ಯಾರಂಟಿ ಕಾರ್ಡ್ ವಿತರಿಸಲಾಗುವುದು. ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನಿಗದಿ, ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ ಮತ್ತು 24 ಗಂಟೆಗಳ ಕಾಲ ವಿದ್ಯುತ್ ನೀಡುವುದು, ಹೈನುಗಾರಿಕೆ, ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ” ಎಂದರು.