ಕಲಬುರಗಿ : ಸನಾತನ ಧರ್ಮ ಹಿಂದು ಧರ್ಮದ ಬಗ್ಗೆ ಮಾತನಾಡಿದವರು ಯಾರು ಹಿಂದೂಗಳಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.
ನಗರದ ರಂಗಮಂದಿರದಲ್ಲಿ ನಡೆಯುತ್ತಿರುವ ನಾಟಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮ ಅಂದರೆ ಬದಲಾದ ಧರ್ಮ. ಬದಲಾಗುವುದು ಪ್ರಕೃತಿ ನಿಯಮ, ಆದರೆ ಸನಾತನ ಧರ್ಮದ ಅರ್ಥದಲ್ಲಿಯೇ ಬದಲಾದ ಎಂದು ಇದೆ, ಕ್ರೂರಕ್ಕೆ ಕರುಣೆ ಇಲ್ಲದ ಧರ್ಮ ಸನಾತನ ಧರ್ಮ ಎಂದು ಕಿಡಿಕಾರಿದರು.
ಪಾರ್ಲಿಮೆಂಟ್ನಲ್ಲಿ ಹೋಮ ಹವನಕ್ಕೆ ನಮ್ಮ ವಿರೋಧವಿದೆ, ಭಾರತ ಸಂವಿಧಾನದಲ್ಲಿ ಎಲ್ಲ ಜಾತಿ ಧರ್ಮದ ಜನರಿದ್ದಾರೆ, ಸಂವಿಧಾನಕ್ಕೆ ಯಾವುದೇ ಜಾತಿ ಧರ್ಮವಿಲ್ಲ ಎಲ್ಲರೂ ಸಮಾನರು ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.