Sunday, October 1, 2023
spot_img
- Advertisement -spot_img

ದೇಶದಲ್ಲಿ ‌ಶೀಘ್ರವೇ ಹಿಟ್ಲರ್ ಆಡಳಿತ ಬರಲಿದೆ : ಶಾಸಕ‌ ವಿನಯ ಕುಲಕರ್ಣಿ

ಕಿತ್ತೂರು: ದೇಶದಲ್ಲಿ ‌ಶೀಘ್ರವೇ ಹಿಟ್ಲರ್ ಆಡಳಿತ ಬರಲಿದೆ ಎಂದು ಧಾರವಾಡ ಗ್ರಾಮೀಣ ಶಾಸಕ‌ ವಿನಯ ಕುಲಕರ್ಣಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಹಿಟ್ಲರ್ ಪದ್ಧತಿ ಶೀಘ್ರದಲ್ಲೇ ಬರುವುದರಲ್ಲಿ ಸಂಶಯವಿಲ್ಲ, ಯಾರಾದ್ರೂ ಕೇಂದ್ರ ಸರ್ಕಾರದ ಬಗ್ಗೆ‌ ಮಾತನಾಡಿದ್ರೆ‌ ಜೈಲಿಗೆ ಹಾಕ್ತಾರೆ , ರಾಜ್ಯ ಸರ್ಕಾರ ಟ್ಯಾಕ್ಸ್ ಪೇ ಮಾಡುವುದರಲ್ಲಿ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ಆದ್ರೆ ಕೇಂದ್ರದಿಂದ ನಮಗೆ ಬರುವ ಅನುದಾನ 0 ಆಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ದೂರವಾಣಿ ಕರೆ; ಮತ್ತೆ ಬಿಜೆಪಿ ಸೇರ್ತಾರಾ ಮಾಜಿ ಸಿಎಂ?

ನಾವು ದುಡ್ಡು ಕೊಡ್ತೇವೆ ಅಂದ್ರು ನಮಗೆ ಅಕ್ಕಿಕೊಡಲಿಕ್ಕೆ ಆಗ್ತಿಲ್ಲ , ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 1300 ಮನೆಗಳು ಬಿದ್ದಿವೆ. ಬಹಳಷ್ಟು ಮಂದಿ‌ ಗುಡಿಸಲು ಹಾಗೂ ದೇವಸ್ಥಾನ‌ ಅಂಗನವಾಡಿಗಳಲ್ಲಿ ವಾಸವಾಗಿದ್ದಾರೆ. ಈ‌ ಬಗ್ಗೆ‌ ಸದನದಲ್ಲಿ ಮಾತನಾಡಿರುವೆ, ಅವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ರಿಸರ್ವೇ ಮಾಡಿ‌ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles