Friday, September 29, 2023
spot_img
- Advertisement -spot_img

ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಬಿಜೆಪಿ ಬುಡಮೇಲು ಮಾಡಲು ಹೊರಟಿದೆ : ಡಿ.ಕೆ.ಸುರೇಶ್

ರಾಮನಗರ: ನಾವು ಭಾರತೀಯರು, ನಮ್ಮದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದೇವೆ, ಆದರೆ ನಮ್ಮ ಒಕ್ಕೂಟ ವ್ಯವಸ್ಥೆ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ ಎಂದು ಇಂಡಿಯಾ ಬದಲು ಭಾರತ್ ಎಂದು ನಾಮಕರಣ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು.

ಈ ಬಗ್ಗೆ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಇದು ಒಂದು ಪಕ್ಷದ ಮೇಲೆ ಮಾಡ್ತಿರೋ ದಬ್ಬಾಳಿಕೆ, ಇಂಡಿಯಾ ಅನ್ನೋದು ನಮ್ಮ ಹಕ್ಕು, ಆ ಹೆಸರನ್ನ ನಾವು ಇಟ್ಟುಕೊಂಡಿದ್ದೇವೆ ದೇಶದಲ್ಲಿ ಸಂವಿಧಾನ ಉಳಿಸಲು ಒಟ್ಟಾಗಿದ್ದೇವೆ. ನರೇಂದ್ರ ಮೋದಿ ಚಕ್ರವ್ಯೂಹ ಬೇಧಿಸುತ್ತೇವೆ ಎಂದರು.

ತರಾತುರಿಯಲ್ಲಿ ಅಧಿವೇಶನ ಕರೆದಿದ್ದಾರೆ, ಯಾಕೆ ಕರೆದಿದ್ದಾರೆ ಅನ್ನೋದರ ಅಜೆಂಡಾ ಇಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಇದನ್ನ ಎದುರಿಸುತ್ತೇವೆ, ಅವರು ಏನೇ ಕುತಂತ್ರ ಮಾಡಿದ್ರೂ ಒಗ್ಗಟ್ಟಾಗಿ ಇರ್ತೇವೆ , ಸೆ.7ಕ್ಕೆ ಭಾರತ್ ಜೋಡೋ ಯಾತ್ರೆ ನಡೆದು ಒಂದು ವರ್ಷ, ಇದನ್ನ ಐಕ್ಯತಾ ದಿನ ಅಂತ ಆಚರಣೆ ಮಾಡ್ತಿದ್ದೇವೆ ಎಂದು ತಿಳಿಸಿದರು.


ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪಾದಯಾತ್ರೆ ಮಾಡ್ತೇವೆ, ಸಿಎಂ, ಡಿಸಿಎಂ ಈ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು. ರಾಮನಗರ ಮುಖ್ಯದ್ವಾರದಿಂದ 1 ಗಂಟೆಗಳ ಕಾಲ ನಡೆಯಲಿರುವ ಕಾಲ್ನಡಿಗೆಯಲ್ಲಿ ಕಾಂಗ್ರೆಸ್‌ ಎಲ್ಲ ನಾಯಕರು ರಾಮನಗರದಲ್ಲಿ ಪಾದಯಾತ್ರೆ ಮಾಡ್ತಾರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles