Friday, September 29, 2023
spot_img
- Advertisement -spot_img

ಉದ್ಧವ್‌ ಠಾಕ್ರೆಗೆ ʼರಾಖಿʼ ಕಟ್ಟಿದ ಮಮತಾ ಬ್ಯಾನರ್ಜಿ

ಮುಂಬೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಲು ವಿಪಕ್ಷಗಳ ಇಂಡಿಯಾ ಒಕ್ಕೂಟದ ಸಭೆ ಮುಂಬೈನಲ್ಲಿ ನಾಳೆಯಿಂದ ಎರಡು ದಿನ ನಿಗದಿಯಾಗಿದೆ.

ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ 3ನೇ ಸಭೆ ನಡೆಯಲಿದೆ. ವಿಪಕ್ಷಗಳ ನಾಯಕರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ.

ಈ ಸಭೆಗಾಗಿ ಮುಂಬೈಗೆ ಬಂದಿಳಿದಿರುವ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಮನೆಗೆ ಭೇಟಿ ನೀಡಿದರು.

ಅಲ್ಲದೆ ಇಂದು ರಕ್ಷಾಬಂಧನದ ಅಂಗವಾಗಿ ಉದ್ಧವ್‌ ಠಾಕ್ರೆ ಅವರಿಗೆ ಮಮತಾ ಬ್ಯಾನರ್ಜಿ ರಾಖಿ ಕಟ್ಟುವ ಮೂಲಕ ಶುಭಹಾರೈಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles